ಭಾಗ್ಯಶ್ರೀ ಸಿನಿಕಂಭೈನ್ಸ್ ಲಾಂಛನದಲ್ಲಿ ಲಲಿತಾಶಂಕರಲಿಂಗ ಸುಗ್ನಳ್ಳಿ, ರಾಜ್ಯಲಕ್ಷ್ಮಿ ನಿರ್ಮಿಸುತ್ತಿರುವ ಹೋಳಿ ಚಿತ್ರವನ್ನು ಕಳೆದ ವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ ಐತಿಹಾಸಿಕ ಹಿನ್ನಲೆಯುಳ್ಳ ಸಾಮಾಜಿಕ ಚಿತ್ರ ಎಂದು ಪ್ರಶಂಶಿಸಿ ಯಾವುದೇ ಕಟ್ ನೀಡದೇ ಯು ಸರ್ಟಿಫಿಕೇಟ್ ನೀಡಿದ್ದಾರೆ. ಚಿತ್ರವು ಇದೇ ತಿಂಗಳ ಒಂಭತ್ತರಂದು ಬಿಡುಗಡೆಯಾಗಲಿದೆ.
ಶಂಕರಲಿಂಗ ಸುಗ್ನಳ್ಳಿ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೊಡೂರು ಪದ್ಮನಾಭಂ ಛಾಯಾಗ್ರಹಣ, ಅಮರಪ್ರಿಯ ಸಂಗೀತ, ಕೆ.ಪ್ರದೀಪ್ ಸಂಕಲನ, ಪ್ರೋ.ಜಿ.ಹೆಚ್. ಹನ್ನೆರಡು ಮಠ ಮತ್ತು ಪುಂಡಲೀಕ ಕಲ್ಲಿಗನೂರು ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದು ಸ್ಟೆಂಟ್ ಸಿದ್ದು ಸಾಹಸ, ಮದನಹರಿಣಿ, ದಯಾನಂದ ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ ವೆಂಕಟೇಶ್ ಪ್ರಸಾದ್, ರಾಗಿಣಿ, ಶೋಭರಾಜ್, ದೊಡ್ಡಣ್ಣ, ಕರಿಬಸವಯ್ಯ, ಪದ್ಮರಾಜರಾವ್, ಪವಿತ್ರಾಲೋಕೇಶ್, ಬ್ಯಾಂಕ್ ಜನಾರ್ಧನ, ಜಗನ್ನಾಥ್ ಇನ್ನು ಮುಂತಾದರು ಅಭಿನಯಿಸಿದ್ದಾರೆ.